ಗುರುವಾರ, ಮೇ 28, 2009

ಪ್ರತಿಯೊಬ್ಬನೂ ಚಾಲಕ!!

ಪ್ರತಿಯೊಬ್ಬನೂ ಚಾಲಕ. ಬದುಕಿನ ಬಂಡಿಯ ಚಾಲಕ. ಆ ಬದುಕಿನ ಬಂಡಿಯು ಚಾಲಕನ ನಿಯಂತ್ರಣದಲ್ಲಿಯೇ ಇರಬೇಕು. ಇದ್ದರೆ ಒಳ್ಳೆಯದು ಮತ್ತು ಸುಗಮವಾಗಿ ತನ್ನ ಗುರಿಯೆಡೆಗೆ ಸಂಚರಿಸುವಲ್ಲಿ ಹಿತಕಾರಿ.

ಆದರೆ, ಇಂದಿನ ಜೀವನ ಶೈಲಿ ಹೇಗೆ ಸಾಗುತ್ತಿದೆ? ಒಬ್ಬಬ್ಬೊರ ಬದುಕಿನ ಬಂಡಿಯೂ ಹರದಾರಿ ಹಿಡಿದು ಸಾಗುತ್ತಿದೆ. ಒಂದೊಂದೂ ಒಂದೊಂದು ದಿಕ್ಕಿಗೆ. ಆದರೆ ಅದನ್ನು ನಿಯಂತ್ರಿಸುವ ಚಾಲಕರು ನೀವೇ ಆಗಿದ್ದೀರಿ.
ಬೇಸರವಾದರೆ ಬೇಗನೇ ಬದುಕಿನ ಬಂಡಿಯ ಹಳ್ಳಕ್ಕೆ ಬೀಳಿಸಬೇಕೆ?

ಉದಾಹರಣೆಗೆ: ಬದುಕಿನಲ್ಲಿ ಜಿಗುಪ್ಸೆಯಾಯಿತೆಂದರೆ ತನ್ನಾತ್ಮಹತ್ಯೆಯ ಮಾಡಿಕೊಳ್ಳಬೇಕೆ? ಅಥವಾ ರೋಗರುಜಿನದಿಂದ ನರಳುತ್ತಿದ್ದರೆ, ಸಾಲಬಾಧೆಯಿಂದ ತೆವಳುತ್ತಿದ್ದರೆ, ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಬರಲಿಲ್ಲವೆಂದ ಮಾತ್ರಕ್ಕೆ, ಪ್ರೇಮ-ಪ್ರೀತಿ ಭಗ್ನವಾಗಿದ್ದಕ್ಕೆ, ಮಿತ್ರದ್ರೋಹವಾಯಿತೆಂದರೆ ಅಥವಾ ಸಣ್ಣ, ಕ್ಷುಲ್ಲಕ ಕಾರಣಗಳಿಗೆಲ್ಲ ಬದುಕನ್ನೇ ಬಲಿಯಾಗಿಸಿದರೆ ಏನು ಚೆನ್ನ? ಅದರಿಂದ ಆಗುವ ಪರಿಣಾಮವೇನಾದರೂ ಉತ್ತಮವಾಗಿರುತ್ತದೆಯೆ? ಏಕೆಂದರೆ, ಆತ್ಮಹತ್ಯೆಯನ್ನು ಮಾಡಿಕೊಂಡು ತನ್ನ ಜೀವವನ್ನು ತೆಗೆದುಕೊಂಡ ಮಾತ್ರಕ್ಕೆ ಎಲ್ಲ ಪರಿಹಾರವಾಯಿತೆಂದು ತಿಳಿದುಕೊಳ್ಳುವುದು ಶುದ್ಧ ಸುಳ್ಳು. ಇಂತಹ ಕೆಲಸ ಮಾಡಿಕೊಂಡವರ ಪೋಷಕರು, ಒಡಹುಟ್ಟಿದವರು, ಆಪ್ತರು, ಮಿತ್ರರು ಇವರಿಗೆಲ್ಲ ಇದರಿಂದ ಸಂತಸವಾಗುತ್ತದೆಯೆ? (ಕೆಲವರಿಗೆ ಆಗಬಹುದು, ಅದು ಬೇರೆ ವಿಚಾರ). ಇಂತಹ ಕೃತ್ಯಗಳನ್ನು ನಿಯಂತ್ರಿಸಿಕೊಳ್ಳುವುದು ಚಾಲಕನ (ವ್ಯಕ್ತಿಯ) ಕೈಯಲ್ಲಿಯೇ ಇದೆ. ಇದನ್ನೇ... DRIVE - It is a solo performance that only you can control. ಎಂದು ಹೇಳಬಹುದು.

ಜೀವನದಲ್ಲಿ ಉನ್ನತ ಮಟ್ಟಕ್ಕೆ ಏರಬೇಕಾದವರೂ ನೀವೆ. ಬದುಕನ್ನು ಮುನ್ನಡೆಸುವ, ಉತ್ತಮ ಬದುಕಿನ ದಾರಿಯಲ್ಲಿ ಸಾಗುವ ಚಾಲಕನೂ ನೀವೆ. ಹೀಗಿರಬೇಕಾದರೆ, ಬದುಕಿನ ಬಂಡಿಯು ಅತಿ ವೇಗವಾಗಿ, ಅತಿ ನಿಧಾನವಾಗಿ ಅಥವಾ ಅಡ್ಡಾದಿಡ್ಡಿಯಾಗಿ ಚಲಿಸದಂತೆ ನೋಡಿಕೊಳ್ಳುತ್ತಾ ನಿಯಂತ್ರಣದ ಲಗಾಮು ಹಿಡಿವವರೂ, ಲಗಾಮನ್ನು ಲಂಗಿಲ್ಲದೇ ಬಿಡುವವರೂ ನೀವೇ ಆಗಿದ್ದೀರಿ.

ಅದಕ್ಕೆಂದೇ ನಾವು ನೀವೆಲ್ಲ Live each day like it is your last-make the most out of every moment ನೆನಪಿನಲ್ಲಿಡಬೇಕು. ನೀವೇನಂತೀರಿ??

3 ಕಾಮೆಂಟ್‌ಗಳು:

Dr.Gurumurthy Hegde ಹೇಳಿದರು...

Super sir,

jeevanada bandi sari yaagi irabkeu, illadiddare apaghaata tappiddalla

PaLa ಹೇಳಿದರು...

"ಈಸಬೇಕು ಇದ್ದು ಜಯಿಸಬೇಕು", ಅನ್ನೋದನ್ನ ನಿಮ್ಮ ಮಾತಲ್ಲಿ ಚೆನ್ನಾಗಿ ಹೇಳಿದೀರ

ಕ್ಷಣ... ಚಿಂತನೆ... ಹೇಳಿದರು...

ಗುರುಮೂರ್ತಿಯವರೆ, ನೀವು ಸರಿಯಾದ ಮಾತನ್ನೇ ಹೇಳಿದ್ದೀರಿ. ಧನ್ಯವಾದಗಳು.

ಪಾಲ ಅವರೆ, ಈ ನುಡಿಗಟ್ಟನ್ನು ನೆನಪಿಸಿದ್ದಕ್ಕಾಗಿ ಧನ್ಯವಾದಗಳು.