ಬುಧವಾರ, ನವೆಂಬರ್ 3, 2010

ಬದುಕೊಂದು ಪಯಣ

Photo:Chandrashekara B.H.Sept2010
ಬದುಕೊಂದು ಪಯಣ

ಹುಟ್ಟೆಂಬುದು ಆರಂಭ
ಸಾವೆಂಬುದು ಅಂತ್ಯದ ತಾಣ

ನಡುವಿಹುದು ಜೀವನ ಪಯಣ

ಶೈಶವದಿಂದ ಬಾಲ್ಯದೆಡೆಗೆ
ಯೌವ್ವನದಿಂದ ಹಿರಿತನದೆಡೆಗೆ
ಸಾಗುತಿಹುದು ಜೀವನ ಪಯಣ

ಅಜ್ಞಾನದಿಂದ ಸುಜ್ಞಾನದೆಡೆಗೆ
ಕೆಲಬಾರಿ ಜ್ಞಾನದಿಂದ ಅಜ್ಞಾನದೆಡೆಗೆ

ಸಾಗುತಿಹುದು ಜೀವನ ಪಯಣ


ಬೆಳಕಿನಿಂದ ಕತ್ತಲೆಡೆಗೆ
ಕತ್ತಲಿಂದ ಬೆಳಕಿನೆಡೆಗೆ
ಸಾಗುತಿಹುದು ಜೀವನ ಪಯಣ

ದೌರ್ಬಲ್ಯದಿಂದ ದೃಢತೆಯೆಡೆಗೆ
ದೃಢತೆಯಿಂ ಜಡತತ್ವದೆಡೆಗೆ

ಸಾಗುತಿಹುದು ಜೀವನ ಪಯಣ


ನಂಬಿಕೆಯಿಂದ ಪ್ರಾರ್ಥನೆಯೆಡೆಗೆ
ಸಶಕ್ತಿಯಿಂದ ಸಹನಾಶಕ್ತಿಯೆಡೆಗೆ
ಸಾಗುತಿಹುದು ಜೀವನ ಪಯಣ

ನಂಬಿಕೆಯಿಂ ಅಪನಂಬಿಕೆಗಳೆಡೆಗೆ
ಸಹನೆಯಿಂದ ಕಡುಕೋಪದೆಡೆಗೆ

ಸಾಗುತಿಹುದು ಜೀವನ ಪಯಣ


ಛಲದಿಂದ ಮುನ್ನುಗುವೆಡೆಗೆ
ಅಂತಸ್ಸತ್ವವನು ಎಬ್ಬಿಸುವೆಡೆಗೆ
ಸಾಗುತಿಹುದು ಜೀವನ ಪಯಣ

ಹಲವೊಮ್ಮೆ ಅಧೈರ್ಯದೆಡೆಗೆ
ಅಂತಸ್ಸತ್ವದಿಂ ನಿಶ್ಶಕ್ತಿಯೆಡೆಗೆ
ಸಾಗುತಿಹುದು ಜೀವನ ಪಯಣ

ಇರಲಿ ಎಂದಿಗೂ ಎದೆಗುಂದದ ಛಲ
ಹಿಂದಿಕ್ಕದ ಹೆಜ್ಜೆ, ಕಾರಣ
ಸಾಗುತಿಹುದು ಜೀವನ ಪಯಣ

ಹುಟ್ಟೆಂಬುದು ಆರಂಭ
ಸಾವೆಂಬುದು ಅಂತ್ಯದ ತಾಣ
ನಡುವಿಹುದು ಜೀವನ ಪಯಣ, ಚಾರಣ


ಚಿತ್ರ-ಕವನ: ಚಂದ್ರಶೇಖರ ಬಿ.ಎಚ್. ೩.೧೧.೨೦೧೦


9 ಕಾಮೆಂಟ್‌ಗಳು:

PARAANJAPE K.N. ಹೇಳಿದರು...

ಚೆನ್ನಾಗಿದೆ.

Dr.D.T.Krishna Murthy. ಹೇಳಿದರು...

ಕವನ ತುಂಬಾ ಚೆನ್ನಾಗಿದೆ.

ಮಹೇಶ ಭಟ್ಟ ಹೇಳಿದರು...

ಚೆನ್ನಾಗಿದೆ

ಅನಂತ್ ರಾಜ್ ಹೇಳಿದರು...

ಬದುಕೊ೦ದು ಪಯಣ - ಅರ್ಥಗರ್ಭಿತವಾಗಿದೆ.

ಶುಭಾಶಯಗಳು
ಅನ೦ತ್

balasubramanya ಹೇಳಿದರು...

ಕವನ ಸರಳವಾಗಿ ಚೆನ್ನಾಗಿದೆ.

shivu.k ಹೇಳಿದರು...

ಬದುಕಿನ ಬಗೆಗಿನ ಕವನ ತುಂಬಾ ಚೆನ್ನಾಗಿದೆ..

ಕ್ಷಣ... ಚಿಂತನೆ... ಹೇಳಿದರು...

ಕವನವನ್ನು ಇಷ್ಟಪಟ್ಟ ಎಲ್ಲರಿಗೂ ಧನ್ಯವಾದಗಳು.
ದೀಪಾವಳಿ ಹಬ್ಬದ ಶುಭಾಶಯಗಳು.

KALADAKANNADI ಹೇಳಿದರು...

ಖುಷಿ ಕೊಟ್ಟ ಕವನ .ಚೆನ್ನಾಗಿದೆ.
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.

ಸೀತಾರಾಮ. ಕೆ. / SITARAM.K ಹೇಳಿದರು...

ಜ್ಞಾನದಿಂದ ಅಜ್ಞಾನಕ್ಕೆ ಹೋಗುವದಾಗಲಿ, ಬೆಳಕಿಂದ ಕತ್ತಲೆಗೆ ಹೋಗುವದಾಗಲಿ, ಜೀವನದಲ್ಲಿ ಇದ್ದರೂ ಅದರ ಪ್ರಸ್ತುತಿ ಧನಾತ್ಮಕ ಭಾವದ ಕವನದಲ್ಲಿ ಬೇಕೇ? ಬೇಕಿದ್ದರೂ ಖಂಡನೆಯಲ್ಲಿರಬೇಕಿತ್ತು ಎಂದು ನನ್ನ ಅಭಿಪ್ರಾಯ ಮಿಕ್ಕಂತೆ ಕವನ ಸರಳವಾಗಿ ಬದುಕ ಪಯಣವನ್ನ ಸಾರ್ಥಕವಾಗಿ ಬಿಂಬಿಸುತ್ತದೆ.