ಮಂಗಳವಾರ, ಮಾರ್ಚ್ 24, 2009

ಈ ಸಂಭಾಷಣೆ...

ಆ ದಿನ ಕ್ಯಾಮೆರಾ ಹಿಡಿದು ಮನೆ ಮತ್ತು ಕಚೇರಿಯ ಕ್ಯಾಂಪಸ್ಸಿನಲ್ಲಿ ಸಂಜೆ ಸುತ್ತಾಡುತ್ತಿದ್ದೆ.
ಹಸಿರು ತುಂಬಿದ ಮರದಾಳದಿಂದ ಹಕ್ಕಿಗಳ ಕೂಗು. ದಿನವೂ ಆಲಿಸುತ್ತಿದ್ದ ಅದೇ ಗಿಲಿವಿನ್ದೀನ್ ಕೂಗು. ಹಸಿರು ಎಲೆಗಳ ನಡುವೆ ಈ ಗಿಳಿಗಳು ಕಾಣುತ್ತಿಲ್ಲ, ಆದರೆ ಸದ್ದು ಮಾತ್ರ ಕೇಳುತ್ತಿದೆ.
ಅಲ್ಲಿಯೇ ಮತ್ತೆ ಸುತ್ತಾಡುತ್ತಿದ್ದಾಗ ನನ್ನ ಕಣ್ಣಿಗೆ ಈ ದೃಶ್ಯಾವಳಿ ಬಿದ್ದಿತು. ಸರಿ, ಕೈಯಲ್ಲಿಯೇ ಕ್ಯಾಮೆರಾ ಇತ್ತಲ್ಲ! ಒಂದೆರಡು ಸ್ನ್ಯಾಪ್‌ ಕ್ಲಿಕ್ಕಿಸಿದೆ.

ಅಲ್ಲಿ ೩ ಗಿಳಿಗಳ ಸಂಭಾಷಣೆ. ಆಗ ನೆನಪಾಗಿದ್ದು `ಈ ಸಂಭಾಷಣೆ, ನಮ್ಮ ಈ ಪ್ರೇಮ ಸಂಭಾಷಣೆ, ಅತಿ ನವ್ಯ ರಸ ಕಾವ್ಯ' ಗೀತೆ.
ಆದರೆ ಅಲ್ಲಿರುವುದು ೩ ಗಿಳಿಗಳು. ಆ ಹಾಡಿಗೂ ಈ ಗಿಳಿಗಳಿಗೂ ಸಂಬಂಧವಿರದು ಎನಿಸಿತು. ಹಾಗೆಯೇ ಚಿಂತಿಸುತ್ತಿದ್ದಾಗ "ಯಾರು ಹಿತವರು ಈ ೩ ವರೊಳಗೆ " ಎಂದು ದಾಸರಪದ ನೆನಪಾದರೆ...
ಆ ೩ ವರಲ್ಲಿ (ಗಿಳಿಗಳಲ್ಲಿ) ಒಂದು ನಾ ಹೋಗಿಬರುವೆ ಎಂದು ಹಾರಿಹೋಗಬೇಕೆ?
ಆಗ ನಾ ಹಾಡಲು ನೀ ಹಾರಿಹೋಗಬೇಕು (ನಾ ಹಾಡಲು ನೀವು ಹಾಡಬೇಕು ಬದಲಾಗಿ)ಎಂದು ಯೋಚಿಸಿರಬೇಕೆ ಈ ಇಬ್ಬರಲ್ಲಿ ಒಬ್ಬರು??!!
ಹೀಗೆ ಒಂದೆರಡು ನಿಮಿಷಗಳ ಈ ಸಂಭಾಷಣೆ ಒಂದು ಗಿಳಿಯು ಹಾರಿಹೋಗುವಲ್ಲಿ ಮುಕ್ತಾಯವಾಯಿತು.
ಗಿಳಿವಿಂಡಿನ ಬಗೆಗಿನ ಹಾಡನ್ನು http://puttanaputa.blogspot.com/2008/08/blog-post_2044.html ಈ ಪುಟ್ಟನಪುಟದಲ್ಲಿ ಓದಿದರೆ ನಿಮಗೇನು ಅನಿಸಬಹುದು?

6 ಕಾಮೆಂಟ್‌ಗಳು:

Ittigecement ಹೇಳಿದರು...

ಕ್ಷಣ ಚಿಂತನೆ....

ಇತ್ತೀಚೆಗೆ ನೀವು ಬರವಣಿಗೆಯಲ್ಲಿ ಹಿಡಿತ ಸಾಧಿಸುತ್ತಿರುವಿರಿ...
ಹೀಗೆ ಇನ್ನಷ್ಟು ಬರೆಯಿರಿ...
ಇಷ್ಟವಾಗುತ್ತದೆ...

ಚಿತ್ರಲೇಖನಕ್ಕಾಗಿ
ಅಭಿನಂದನೆಗಳು...

ಕ್ಷಣ... ಚಿಂತನೆ... ಹೇಳಿದರು...

ಪ್ರಕಾಶ್ ಸರ್‍, ಇವೆಲ್ಲ ನಿಮ್ಮೀ ಪ್ರೋತ್ಸಾಹದಿಂದಲೇ ಸಾಧ್ಯವಾಗುತ್ತಿದೆ ಅನಿಸಿದೆ. ಪ್ರತಿಕ್ರಿಯೆಗಳಿಗೆ ಧನ್ಯವಾದಗಳು.

ತೇಜಸ್ವಿನಿ ಹೆಗಡೆ ಹೇಳಿದರು...

ತುಂಬಾ ಮುದ್ದಾಗಿವೆ ಗಿಣಿಗಳು..ಜೊತೆಗೆ ಸುಂದರ ಹಾಡುಗಳ ನೆನಪನ್ನೂ ತರಿಸಿದ್ದೀರಿ.. ಧನ್ಯವಾದಗಳು.

ಕ್ಷಣ... ಚಿಂತನೆ... ಹೇಳಿದರು...

ಮೇಡಂ, ಧನ್ಯವಾದಗಳು.

ಕ್ಷಣ... ಚಿಂತನೆ... ಹೇಳಿದರು...

ಈ ಸಂಭಾಷಣೆಯನ್ನು ಮತ್ತಷ್ಟು ಮುಂದುವರೆಸಬಹುದಿತ್ತು ಎಂದು ಈಗ ಅನಿಸುತ್ತಿದೆ. ಮತ್ತೊಮ್ಮೆ ಯಾವಾಗಲಾದರೂ ಮುಂದುವರೆಸುತ್ತೇನೆ.

ಪ್ರತಿಕ್ರಿಯೆ ನೀಡಿದವರೆಲ್ಲರಿಗೂ ತುಂಬಾ ಥ್ಯಾಂಕ್ಸ್‌.

shivu.k ಹೇಳಿದರು...

ಸರ್,

ಫೋಟೋಗೆ ತಕ್ಕ ಸಂಭಾಷಣೆ...ಚೆನ್ನಾಗಿದೆ...ಇಂಥದ್ದು ಇನ್ನಷ್ಟು ಕೊಡಿ...
ಧನ್ಯವಾದಗಳು..